Pages

Friday, January 15, 2016

ಪುದೀನ ಉಪಯೋಗಗಳು


ಪುದೀನ ವಿಶಿಷ್ಟ ಕಂಪು ಮತ್ತು ರುಚಿಗೆ ಹೆಸರಾದ ಮೂಲಿಕೆ. ಪುದೀನ ಪೌಷ್ಟಿಕ ಸೊಪ್ಪು. ಇದರಲ್ಲಿ ಶರೀರದ ಬೆಳವಣಿಗೆ ಮತ್ತು ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಪ್ರೋಟೀನ್, ಶರ್ಕರಪಿಷ್ಟ, ಕೊಬ್ಬು, ಖನಿಜ ಪದಾರ್ಥ, ನಾರುಪದಾರ್ಥ, ಸುಣ್ಣ, ಜೀವಸತ್ವಗಳು ಹಾಗೂ ಕ್ಯಾಲೊರಿಗಳು ಅಧಿಕ ಪ್ರಮಾಣದಲ್ಲಿರುತ್ತವೆ.


  • ಪದೇ ಪದೆ ಕಾಡುವ ಶ್ವಾಸಕೋಶದ ಸೋಂಕಿಗೆ 1 ಚಮಚ ಪುದೀನ ರಸಕ್ಕೆ 1 ಚಮಚ ಕ್ಯಾರೆಟ್ ರಸ ಹಾಗೂ 1ಚಮಚ ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಗೆ ಸೇವಿಸಿದರೆ ಶ್ವಾಸಕೋಶವು ಸೋಂಕು ರಹಿತವಾಗಿ ಬಲವಾಗುತ್ತದೆ .
  • 1ಚಮಚ ಪುದೀನ ರಸಕ್ಕೆ 1/2 ಚಮಚ ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಪಿತ್ತ ಹೆಚ್ಚಾದಾಗ ಕಾಡುವ ವಾಂತಿ, ತಲೆನೋವು ಕಡಿಮೆಯಾಗುತ್ತದೆ.
  • ಪುದೀನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಆ ಪುಡಿಯಿಂದ ಹಲ್ಲುಗಳನ್ನು ಉಜ್ಜಿದರೆ ಬಾಯಿ ವಾಸನೆ ಬರುವುದಿಲ್ಲ ಮತ್ತು ವಸಡುಗಳು ದೃಢವಾಗುತ್ತದೆ.
  • ಪುದೀನ ಕಷಾಯವನ್ನು ಸೇವಿಸಿದರೆ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಕಡಿಮೆಯಾಗುತ್ತದೆ
  • ಕಣ್ಣಿನ ಸುತ್ತ ಕಪ್ಪ್ಪು ಕಟ್ಟಿದ್ದರೆ ಪುದೀನ ಎಲೆಗಳನ್ನು ಪೇಸ್ಟ್ ಮಾಡಿ ನಿಯಮಿತವಾಗಿ ಕಣ್ಣಿನ ಸುತ್ತಲೂ ಲೇಪಿಸಿ.
  • ತಲೆಸಿಡಿತ, ಸಂಧಿವಾತ ಮುಂತಾದವುಗಳಲ್ಲಿ ಎಲೆಗಳನ್ನು ನುಣ್ಣಗೆ ಅರೆದು ಪಟ್ಟು ಹಾಕಿದರೆ ಉಪಶಮನ ಸಿಗುತ್ತದೆ.
  • ಇದು ಕರುಳಿನಲ್ಲಿ ಒಗರನ್ನುಂಟು ಮಾಡುತ್ತದೆ. ಬಿಕ್ಕಳಿಕೆಗೆ ಇದನ್ನು ಸೇವಿಸುವುದು ಲಾಭದಾಯಕ.
  • ಎಲೆಗಳಲ್ಲಿ ಕ್ರಿಮಿನಾಶಕ ಗುಣಗಳಿವೆ. ಊಟದ ನಂತರ ಇದರ ಎಲೆಗಳನ್ನು ಅಗಿದು ತಿನ್ನುವುದರಿಂದ ಹುಳುಕು ಹಲ್ಲುಗಳ ತೊಂದರೆಬಾರದು.
  • ಇದು ಜಂತುನಾಶಕವೂ ಹೌದು. ಎಲೆಗಳಲ್ಲಿ ಮೂತ್ರೋತ್ಪಾದಕ ಗುಣಗಳಿವೆ. 
  • ಸಂಗೀತಗಾರರು ಮತ್ತು ಭಾಷನಕಾರರು ತಮ್ಮ ಧ್ವನಿ ಹಾಗೂ ಗಂಟಲು ಚೆನ್ನಾಗಿರಲು ಇದರ ಎಲೆಗಳನ್ನು ತಿನ್ನುವುದು ಲಾಭದಾಯಕ.
  • ಇದರ ಕಷಾಯಕ್ಕೆ ಒಂದು ಚಿಟಿಕೆ ಅಡುಗೆ ಉಪ್ಪು ಬೆರೆಸಿ ಮುಕ್ಕಳಿಸಿದರೂ ಸಾಕು, ಸಾಮಾನ್ಯ ನೆಗಡಿ, ಕೆಮ್ಮು ನಿವಾರಣೆಯಾಗುತ್ತದೆ.
  • ಮೊಡವೆಗಳು ಮಾಯವಾಗಿ ಮುಖಕಾಂತಿ ಹೆಚ್ಚಲು ಇದರ ಎಲೆಗಳ ರಸ ಮತ್ತು ಅರಿಶಿಣಗಳನ್ನು ಬೆರೆಸಿ ಹಚ್ಚಬೇಕು.

Thursday, January 14, 2016

ಸೌತೆಕಾಯಿ ವಿಶೇಷತೆಗಳು


ದಕ್ಷಿಣ ಏಷಿಯಾ ಮೂಲದಿಂದ ಬಂದ ಸೌತೆಕಾಯಿ ಈಗ ವಿಶ್ವವ್ಯಾಪಿ. ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ.  ಸಂಪೂರ್ಣ ಆರೋಗ್ಯಕ್ಕೆ ಅದರ ಸೇವನೆ ತುಂಬ ಸಹಕಾರಿ.  ಹಾಗಾದರೆ, ಸೌತೆಕಾಯಿಯ ವಿಶೇಷತೆಗಳನ್ನು ತಿಳಿಯಿರಿ.


  • ಪ್ರತಿಶತ ೯೦ರಷ್ಟು ನೀರಿನ ಅಂಶ ಹೊಂದಿದ ಸೌತೆಕಾಯಿ ನಿಮ್ಮ ದೇಹದ ನಿರ್ಜಲೀಕರಣವನ್ನು ಯಶಸ್ವಿಯಾಗಿ ನೀಗಿಸುತ್ತದೆ. ಶರೀರವನ್ನು ತಂಪುಗೊಳಿಸಿ ಮನಸ್ಸಿಗೆ ಉತ್ಸಾಹವನ್ನು ತುಂಬುತ್ತದೆ.  ಹೊಟ್ಟೆಯುರಿ, ಎದೆಯುರಿಗಳನ್ನು ಶಮನಗೊಳಿಸುತ್ತದೆ.
  •  ಸೌತೆಕಾಯಿ ಸೇವನೆ ತುಂಬ ಪರಿಣಾಮಕಾರಿ.  ನಿತ್ಯ ಸೇವನೆಯಿಂದ ನಿಮ್ಮ ತೂಕವನ್ನು ತಕ್ಕ ಮಟ್ಟಿಗೆ ಕಡಿಮೆಗೊಳಿಸಿಕೊಳ್ಳಬಹುದು.
  • ಸೌತೆಕಾಯಿ ಶರೀರದಲ್ಲಿನ ಅನುಪಯುಕ್ತ ಹಾಗು ವಿಷಕಾರಕ ವಸ್ತುಗಳನ್ನು ಹೊರಹಾಕುತ್ತದೆ
  • ನಿತ್ಯ ಸೇವನೆಯಿಂದ ಮೂತ್ರ ಪಿಂಡದಲ್ಲಿನ ಕಲ್ಲುಗಳು ಕರಗುತ್ತವೆ. 
  •  ಎದೆ, ಗರ್ಭಾಶಯ, ಅಂಡಾಶಯ, ಪ್ರಾಸ್ಟೇಟ ಮುಂತಾದ ಕ್ಯಾನ್ಸರ್‌ಗಳಿಗೆ, ಶರೀರ ಒಳಗಾಗುವದನ್ನು ಅದು ತಪ್ಪಿಸುತ್ತದೆ. ಈ ವಿಷಯವನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ
  • ನಿಮ್ಮ ಬಾಯಿವಾಸನೆಗೆ ಸೌತೆಕಾಯಿಯ ತೆಳುವಾದ ಹೋಳನ್ನು ನಾಲಿಗೆಯ ಮೇಲೆ ಇಟ್ಟುಕೊಂಡು ಬಾಯಿಯ ಮೇಲಿನ ಅಂಗಳಕ್ಕೆ ಒತ್ತಿರಿ.  ಹಾಗೆಯೇ ಒಂದರ್ಧ ನಿಮಿಷ ಒತ್ತುತ್ತಿರಿ.  ಅದು ನಿಮ್ಮ ಬಾಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
  • ಸೌತೆಕಾಯಿಯಲ್ಲಿನ ಹೆಚ್ಚು ನೀರಿನ ಪ್ರಮಾಣ ಹಾಗು ಕಡಿಮೆ ಕ್ಯಾಲೋರಿಯಿಂದಾಗಿ ಅದು ಪಚನ ಕ್ರಿಯೆಗೆ ತುಂಬ ಅನಕೂಲಕರ.
  • ಸೌತೆಕಾಯಿಯಲ್ಲಿನ ನಾರಿನ ಅಂಶ ಮಲಬದ್ಧತೆಯಿಂದ ಬಳಲುವವರಿಗೆ ವರದಾನವಾಗಿದೆ.
  •  ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಅದು ಅತ್ಯಂತ ಉಪಯುಕ್ತ ಆಹಾರ.
  • ಸೌತೆಕಾಯಿ ರಸ ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಗೆ ಸಹಾಯ ಮಾಡುತ್ತದೆ.  ಜೊತೆಗೆ ಅದು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಲು ತುಂಬ ಸಹಕಾರಿ.  
  • ಇದರಲ್ಲಿ ಪೊಟ್ಯಾಸಿಯಂ ಹಾಗು ಮ್ಯಾಗ್ನೇಸಿಯಂ ಇರುವದರಿಂದ ರಕ್ತದ ಒತ್ತಡವನ್ನು ಅದು ನಿಯತ್ರಿಸಬಲ್ಲದು.  ಹೆಚ್ಚು ಹಾಗು ಕಡಿಮೆ ರಕ್ತದ ಒತ್ತಡ ಉಳ್ಳವರಗೆ ಸೌತೆಕಾಯಿ ಸೇವನೆ ತುಂಬ ಪ್ರಯೋಜನಕಾರಿ.
  •  ಏಡ್ಸ ಮೊದಲಾದ ಕಾಯಿಲೆಗಳಿಂದ ಸೊರಗಿದವರಿಗೆ ಸೌತೆಕಾಯಿ ಅಮೃತ ಸಮಾನ.
  • ಬೆಳಿಗ್ಗೆ ಎದ್ದೊಡನೆ ತಲೆ ನೋಯುತ್ತಿದೆಯೇ?  ಕಣ್ಣಿಗೆ ಕತ್ತಲೆ ಬಂದಂತಾಗುತ್ತಿದೆಯೇ?  ದಿನವೂ ಸಂಜೆ ಒಂದಿಷ್ಟು ಸೌತೆಕಾಯಿ ಸೇವಿಸಿ.  ಅದರಲ್ಲಿರುವ ಸಕ್ಕರೆ, ಬಿ ಜೀವನಸತ್ವ, ಎಲೆಕ್ಟ್ರೋಲೈಟ ಮುಂತಾದವುಗಳು ನಿಮ್ಮ ದೇಹಕ್ಕೆ ಅವಶ್ಯ ಇರುವ ಪೋಷಕಾಂಶಗಳನ್ನು ಒದಗಿಸಿ ನಿಮ್ಮ ಸಮಸ್ಯೆಗಳನ್ನು ನೀಗಿಸಬಲ್ಲವು.
  •  ವಾತ ಪ್ರಕೋಪ, ಸಂದು-ಕೀಲು ನೋವುಗಳಲ್ಲೂ ಸೌತೆಕಾಯಿ ಸೇವನೆ ತುಂಬ ಪ್ರಯೋಜನಕಾರಿ.
  • ಚರ್ಮ ಉರಿ ಹಾಗು ಸನ್‌ಬರ್ನ್ಸಗಳಲ್ಲಿ ಸೌತೆಕಾಯಿ ರಸ ತುಂಬ ಪ್ರಯೋಜನಕ್ಕೆ ಬರುತ್ತದೆ.
  •  ಕಣ್ಣುಗಳ ಉರಿತ/ನೋವು ಇದ್ದರೆ ಕಣ್ಣು ಮುಚ್ಚಿ, ಕಣ್ಣಿನ ರೆಪ್ಪೆಯ ಮೇಲೆ ಸೌತೆಕಾಯಿಯ ಹೋಳುಗಳನ್ನು ಇಡಿ.  ಅದು ನಿಮ್ಮ ತೊಂದರೆಯನ್ನು ನಿವಾರಿಸಬಲ್ಲದು.
  • ಸವತೆಕಾಯಲ್ಲಿರುವ ಸಿಲಿಕಾನ್ ಹಾಗು ಸಲ್ಫರ್ ಕೇಶವರ್ಧನೆಗೂ ಸಹಕಾರಿ.

ಬರೀ ಆರೋಗ್ಯದ ವಿಷಯದಲ್ಲಿ ಮಾತ್ರ ಅಲ್ಲ ಬೇರೆ ವಿಷಯದಲ್ಲೂ ಸೌತೆಕಾಯಿಂದ ಪ್ರಯೋಜನ ಪಡೆಯಬಹುದು.


  • ನಿಮ್ಮ ಮನೆಯ ಕನ್ನಡಿ ಕಲೆಗಳಿಂದ ಮಂಕಾಗಿದ್ದರೆ, ಅದನ್ನು ಸೌತೆಕಾಯಿ ಹೋಳುಗಳಿಂದ ತಿಕ್ಕಿ ಸ್ವಚ್ಛಗೊಳಿಸಬಹುದು.
  •  ನಿಮ್ಮ ಮನೆಯ ಬಾಗಿಲು-ಕಿಡಕಿಗಳ ಹಿಂಜಿಸ್‌ಗಳು, ಮುಚ್ಚುವಾಗ ತೆರೆಯುವಾಗ ಕರ್ಣಕಠೋರವಾದ ಕೀಜಲು ಸ್ವರವನ್ನು ಹೊರಡಿಸುತ್ತಿದ್ದರೆ; ಸೌತೆಕಾಯಿ ಅದಕ್ಕೂ ಪರಿಹಾರ ನೀಡಬಲ್ಲದು.  ಹಿಂಜಿಸ್ಸುಗಳಿಗೆ ಸೌತೆಕಾಯಿ ರಸವನ್ನು ಸವರಿ.  ಬಾಗಿಲುಗಳು ಸದ್ದಿಲ್ಲದೇ ಮುಚ್ಚಿ ತೆರೆಯುತ್ತವೆ.

Tuesday, August 11, 2015

ಮನೆ ಮದ್ದು ಜೀರಿಗೆ

 



ಎಲ್ಲರ ಅಡುಗೆ ಮನೆಯ ಸಾಂಬಾರ್ ಬಟ್ಟಲಲ್ಲಿ ಕಾಣಿಸಿಕೊಳ್ಳುವ ‘ಜೀರಿಗೆ’ ಬಹೂಪಯೋಗಿ ಕಿಚನ್ ಮೆಡಿಸಿನ್ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇದೊಂದು ರೋಗ ನಿರೋಧಕ ಶಕ್ತಿಯುಳ್ಳ ಮಸಾಲೆ ಪದಾರ್ಥ. ವಿಧಿಬದ್ಧವಾಗಿ ಜೀರಿಗೆ ಸೇವಿಸುವುದರಿಂದ ಹೃದಯರೋಗ, ಪಿತ್ತಪ್ರಕೃತಿ, ವಾಯು ವಿಕೋಪ, ಮಲಬದ್ಧತೆ, ಬಾಯಿಹುಣ್ಣು, ಆಮ್ಲತೆ, ಜ್ವರ, ಮೂತ್ರಕೋಶ ಸಂಬಂಧಿ ಕಾಯಿಲೆ, ಜೀರ್ಣ ಶಕ್ತಿ ಇಲ್ಲದಿರುವುದು, ಹೀಗೆ ಹತ್ತು ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ತಡೆಗಟ್ಟಬಹುದಾಗಿದೆ.
ಜೀರಿಗೆ ಸೇವನೆಯ ವಿಧಾನಗಳು
*ಕುಡಿಯುವ ನೀರಿನ ಡ್ರಮ್ಮಿಗೆ ಒಂದೆರಡು ಚಮಚ ಜೀರಿಗೆ ಮುಂಜಾನೆ ಸೇರಿಸಿರಿ. ಇದರಿಂದ ಪರಿಮಳಯುಕ್ತ ಜೀರಿಗೆ ಮಿಶ್ರಿತ ನೀರು ಮನೆ ಮಂದಿಗೆಲ್ಲಾ ದೊರೆಯುತ್ತದೆ. ಜೀರಿಗೆ ಮಿಶ್ರಣದ ನೀರು ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. ಜೊತೆಗೆ ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.
*ಜೀರಿಗೆ ಕಷಾಯ: ಸ್ವಲ್ಪ ಜೀರಿಗೆ ಹದವಾಗಿ ಬಿಸಿ ಮಾಡಿ, ಮಿಕ್ಸಿಯಲ್ಲಿ ನುಣುಪಾಗಿ ಹುಡಿ ಮಾಡಿ, ಕಾಫಿ – ಟೀ ಬದಲಾಗಿ, ಬಿಸಿ ನೀರಿನಲ್ಲಿ ಸೇರಿಸಿ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಗೂ ಹಾಲು ಸೇರಿಸಿ ಮುಂಜಾನೆ ತಿಂಡಿ ತಿನ್ನುವಾಗ ಹಾಗೂ ಸಾಯಂಕಾಲ ಕುಡಿಯಿರಿ. ಇದರಿಂದ ಬಾಯಿರುಚಿ ಹಾಗೂ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಜೀರಿಗೆ ಕಶಾಯ ಸೇವಿಸಿದ ವ್ಯಕ್ತಿಗಳಿಗೆ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಮೂತ್ರಕೋಶದ ವೈಫಲ್ಯ ಬರುವ ಸಾಧ್ಯತೆಯೇ ಇರುವುದಿಲ್ಲ.
*ಕೆಮ್ಮು ತಲೆ ನೋವು ಜ್ವರ ಬಂದಾಗ: ನಾಲ್ಕು ಗ್ಲಾಸ್‌ ನೀರಿಗೆ 3–4 ಚಮಚ ಜೀರಿಗೆ ಪುಡಿ, 6–8 ಮೆಣಸಿನಕಾಳು ಪುಡಿ, ಒಣ ಶುಂಠಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ, ತಣಿಸಿ, ದಿನಕ್ಕೆ 3–4 ಬಾರಿ ಕುಡಿದರೆ ಕೆಮ್ಮು, ತಲೆನೋವು, ಜ್ವರ ಒಂದೆರಡು ದಿನಗಳಲ್ಲಿ ಮಾಯವಾಗುತ್ತದೆ.
*ಮನೆಯಲ್ಲಿ ಕೆಲಸ ಮಾಡುವಾಗ ಹಾಗೂ ಓಡಾಡುವಾಗ ಒಂದು ಚಿಟಕಿ ಜೀರಿಗೆ ಬಾಯಿಯಲ್ಲಿ ಹಾಕಿ ಅಗಿಯುತ್ತಿದ್ದರೆ, ಇದರಿಂದ ಬರುವ ರಸ, ಬಾಯಿ ಜೊಲ್ಲಿನಲ್ಲಿ ಸೇರಿ ದೇಹದ ಅಂಗಾಂಗ ಪ್ರವೇಶಿಸುತ್ತದೆ. ಈ ಪ್ರಕ್ರಿಯೆಯಿಂದ ಲವಲವಿಕೆ ಉಂಟಾಗುತ್ತದೆ. ಜೊತೆಗೆ ಕಾಯಿಲೆಗೆ ನೋ ಎಂಟ್ರಿ ಸಿಗ್ನಲ್‌ ತೋರಿಸುತ್ತದೆ. ಬಾಯಿ ವಾಸನೆ ಮಾಯವಾಗುತ್ತದೆ.
*ಜೀರಿಗೆ ಬೆಲ್ಲದ ಉಂಡೆ: ಈ ಹಿಂದೆ ತಿಳಿಸಿದಂತೆ ಮಿಕ್ಸಿಯಲ್ಲಿ ನುಣುಪಾಗಿ ಮಾಡಿದ ಜೀರಿಗೆ ಪುಡಿ ಹಾಗೂ ಅದಕ್ಕೆ ಸಮಾನ ತೂಕದ ಬೆಲ್ಲ ಸೇರಿಸಿ, ಬಾಣಲೆಯಲ್ಲಿ ಹದವಾಗಿ ಕುದಿಸಿ, ತಣ್ಣಗಾದ ನಂತರ ಆ ಮಿಶ್ರಣದಿಂದ ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿರಿ. ಬಾಯಾರಿಕೆ ಆದಾಗ ಒಂದು ಉಂಡೆ ಸೇವಿಸಿ ನೀರು ಕುಡಿಯಿರಿ. ಇದರಿಂದ ದೇಹ ತಂಪಾಗಿರುತ್ತದೆ. ಮಕ್ಕಳು ಈ ಉಂಡೆ ತುಂಬಾ ಇಷ್ಟ ಪಡುತ್ತಾರೆ. ಓದುವ ಮಕ್ಕಳ ಜ್ಞಾಪಕ ಶಕ್ತಿ ಕೂಡಾ ವೃದ್ಧಿಯಾಗುತ್ತದೆ.

ಜೀರಿಗೆ ಒಂದು ಉತ್ತಮ ಮನೆ ಮದ್ದು. ಇದರ ಸೇವನೆ ಬಹುಸುಲಭ ಹಾಗೂ ರುಚಿಕರ. ಪ್ರತೀ ದಿವಸ ಮನೆ ಮಂದಿ ಎಲ್ಲಾರೂ ಒಂದಲ್ಲ ಒಂದು ರೀತಿಯಲ್ಲಿ ಜೀರಿಗೆ ಸೇವಿಸಿ ಧೃಡಕಾಯರಾಗಿರಿ.